Wednesday, October 18, 2006

ಎಲ್ಲಿ?

ಅಸದುಲ್ಲಾ ಖಾನ್ ಘಾಲಿಬ್
[ಉರ್ದು]

ನನ್ನಾಶಯಗಳೆಲ್ಲಾ ಮಣ್ಣಾಗಿದೆ
ದಾರಿ ಕಾಣದ ಕಣ್ಣಾಗಿದೆ

ಸಾವು ಬರಬೇಕಾದಾಗ ತಾನೇ ಬರುವುದು
ಆದರೆ ನಿದ್ದೆ ಯಾಕೆ ಬರದಿರುವುದು?

ನನ್ನ ನೋಡಿ ನಾನೇ ನಗುತ್ತಿದ್ದೆ
ಈಗ ನಗುವೂ ಇಲ್ಲ, ಇಲ್ಲ ನಿದ್ದೆ

ಭಕ್ತಿ-ಭಜನೆ ಒಳ್ಳೆಯದೇ, ಗೊತ್ತು
ಆದರೆ ಅದಕ್ಕೂ ಇಲ್ಲ ಉತ್ಸಾಹ, ಈ ಹೊತ್ತು

ಎಲ್ಲಕ್ಕೂ ನನ್ನಿಂದ ಬರೇ ಮೌನ
ಇಲ್ಲವೇ, ಮಾತೇ ಬರುವುದಿಲ್ಲವೇನ?

ನನ್ನ ಹೃದಯದ ಗಾಯ ಕಾಣದಿದ್ದರೇನು?
ಬೆಂದ ಹೃದಯದ ವಾಸನೆ ಬರಲಿಲ್ಲವೇನು?

ನನ್ನ ಬಗ್ಗೆ ನನಗೇ ತಿಳಿಯದ ಹಾಗೆ,
ನೋಡಿಸ್ವಾಮಿ ನಾನಿರೋದೇ ಹೀಗೆ

No comments: