ಅಸದುಲ್ಲಾ ಖಾನ್ ಘಾಲಿಬ್
[ಉರ್ದು]
ನನ್ನಾಶಯಗಳೆಲ್ಲಾ ಮಣ್ಣಾಗಿದೆ
ದಾರಿ ಕಾಣದ ಕಣ್ಣಾಗಿದೆ
ಸಾವು ಬರಬೇಕಾದಾಗ ತಾನೇ ಬರುವುದು
ಆದರೆ ನಿದ್ದೆ ಯಾಕೆ ಬರದಿರುವುದು?
ನನ್ನ ನೋಡಿ ನಾನೇ ನಗುತ್ತಿದ್ದೆ
ಈಗ ನಗುವೂ ಇಲ್ಲ, ಇಲ್ಲ ನಿದ್ದೆ
ಭಕ್ತಿ-ಭಜನೆ ಒಳ್ಳೆಯದೇ, ಗೊತ್ತು
ಆದರೆ ಅದಕ್ಕೂ ಇಲ್ಲ ಉತ್ಸಾಹ, ಈ ಹೊತ್ತು
ಎಲ್ಲಕ್ಕೂ ನನ್ನಿಂದ ಬರೇ ಮೌನ
ಇಲ್ಲವೇ, ಮಾತೇ ಬರುವುದಿಲ್ಲವೇನ?
ನನ್ನ ಹೃದಯದ ಗಾಯ ಕಾಣದಿದ್ದರೇನು?
ಬೆಂದ ಹೃದಯದ ವಾಸನೆ ಬರಲಿಲ್ಲವೇನು?
ನನ್ನ ಬಗ್ಗೆ ನನಗೇ ತಿಳಿಯದ ಹಾಗೆ,
ನೋಡಿಸ್ವಾಮಿ ನಾನಿರೋದೇ ಹೀಗೆ
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
7 years ago
No comments:
Post a Comment